ಎಸ್.ಎಲ್. ಭೈರಪ್ಪನವರ 'ಗ್ರಹಣ' ಕಾದಂಬರಿಯು 1972 ರಲ್ಲಿ ರಚನೆಯಾದ ಕೃತಿ. ಗ್ರಹಣ, ಅಸತ್ಯವು ಸತ್ಯವನ್ನು ಆವರಿಸುವ ಕ್ರಿಯೆ. ಸಮಾಜೋದ್ಧಾರಕ್ಕೆ ಅಗತ್ಯವಾದುದು ವ್ಯಕ್ತಿಯ ವರ್ಚಸ್ಸೊ ಅಥವಾ ಸಂಘಟನೆಯ ಧ್ಯೇಯವೊ? ನಾಮರೂಪಾತ್ಮಕ ಪ್ರಪಂಚದ ಉಪಾಧಿಗಳು ಆತ್ಮೋನ್ನತಿಗೆ ತಡೆಗಳಾದರೆ ಅದೇ ಉಪಾಧಿಗಳು ಸಮಾಜೋದ್ದಾರದ ಸಾದನಗಳಾತ್ತವೆಯೆ? ಹೀಗೆ ಸನ್ಯಾಸಿಯ ಸತ್ಯಾನ್ವೇಷಣೆ ಮತ್ತು ಸಮಾಜದಲ್ಲಿ ಸ್ಥಾಪಿತವಾಗಿರುವ ನಂಬಿಕೆಗಳ ನಡುವೆ ಏರ್ಪಡುವ ಮೌಲ್ಯ ಸಂಘರ್ಷದ ವಿವಿಧ ಮಜಲುಗಳನ್ನು ಪರಾಮರ್ಶಿಸುವ ಕಾದಂಬರಿ ಗ್ರಹಣ. Grahana is the whelming of truth by untruth. A Sanyasi goes about apprising the people of the village that life should be found on values and not superstitions.